ಹರ ಪೂಜೆ ಗುರು ಸೇವೆ



ಹರ ಪೂಜೆ ಗುರು ಸೇವೆ ವರ ಪುಣ್ಯವೆಲ್ಲದೆ

ಬರಿದೆ ಸುಖ ಬೋಗವು ದೊರಕುವುದುಂಟೀ



ಹಣವಿದ್ದಾಗಲೇ ಬಕ್ತಿ ನೆಣವಿದ್ದಾಗಲೆ ಸೇವೆ

ಗುಣವಿದ್ದಾಗಲೆ ಮಾಡಿ ಮುಕ್ತಿ ಪಡೆ ಆತ್ಮಾ

ಒಣ ಮಾತಾಡಿದರೆಲ್ಲಾ ಆ ಆ



ಬ್ರಮೆ ಹರಿದು ಹೋಗುವುದೇ ತ್ರಿನಯನ ಒಲಿಸುವುದು ಬಹು ಕಷ್ಟ ಆತ್ಮಾ

ಹಿಂದಿನ ಪುಣ್ಯವನು ಇಂದುಂಡು ಉಡಬೇಕು

ಇಂದಿನ ಪುಣ್ಯವನು ಮುಂದೆ ಉಣಬೇಕಾತ್ಮಾ

ಬಂಧನವೇಕಿದಕೇ ಏ ... ಏ


ಇಂಧುಧಾರಣೆಯಾಗೆ ಸಂದೇಹವಿಲ್ಲವು ತಿಳಿಕಂಡ್ಯಾ


ಹರಿ ಅಜಸುರರೆಲ್ಲ ಶರೀರ ದಂಡನೆ ಮಾಡಿ

ಪರಮಾತ್ಮನೊಲಿಸಿದರು ಸುಲಬವಲ್ಲಲೆ ಆತ್ಮಾ



ನರ ಪಾಪ ಪುಣ್ಯವನು ನರರ ಸೆರಗಿಲೆ ಹಾಕಿ

ಗುರು ಮಹಾಂತ ಲಿಂಗಾತ ಮರೆಯಾಗಿ ಇರುತಿರುವ