ಪಂಚಾಚಾರ್ಯರ ಭಜಿಸೋ ಹೇ ಮನುಜ


ಪಂಚಾಚಾರ್ಯರ ಭಜಿಸೋ

ಹೇ ಮನುಜ


ವಾಂಚಿತ ಫಲಗಳು

ಸಿಗುವುದು ಸಹಜ


ಹರಿವಿಧಿ ಸುರರಿಗೆ ಪರತರ ಲಿಂಗವ

ಕರದಲಿ ಕೊಟ್ಟು ಮುಕ್ತಿ ಯ ತೋರಿದ


ಸೋಮೇಶ ಸಿದ್ದೇಶ ರಾಮೇಶ ವಿಶ್ವೇಶ

ಶ್ರೀ ಮಲ್ಲಿಕಾರ್ಜುನ ಲಿಂಗ ಗಳಿಂ ತೋರ್ ದ


ಕುಂಭಜ ಗೌತಮ

ಮೊದಲಾದ ಮುನಿಗಳಿಗೆ

ಸಾಂಬ ತತ್ವವ ನೊರೆದು

ಪ್ರೇಮದಿಂದಲಿ ಪೊರೆದ


ಪಡ್ವಿಡಿ ವೃಷ್ಟಿ ಲಂಬನ

ಮುಕ್ತಾ ಗುಚ್ಛ

ಪಂಚವರಣ ಸೂತ್ರಂಗಳ

ರಚಿಸಿ ಮೆರೆದ


ಬ್ರಹ್ಮ ಚಾರಿ ಮುಖ್ಯ

ಚತುರಾಶ್ರಮಂಗಳಿಗೆ

ಬ್ರಹ್ಮ ತತ್ವವ ಮೀರಿ

ಬ್ರಹ್ಮ ನಲ್ಲಿ ಬೆರೆದ